ಶಾಂತಿಧಾಮ

ಹೋಗೋಣ ಬನ್ನಿರಣ್ಣಾ ಸೂಕ್ಷೇತ್ರ ಹಾರಕೂಡಕೆ
ಗುರು ಚನ್ನವೀರರ ಶಾಂತಿಧಾಮಕ್ಕೆ ||ಪ||

ಮೊದಲಿಗೆ ಕಾಣುವುದು ಗುಡಿಶಿಖರವು
ನಂತರವ ಆಗುವುದು ಗುರುದರ್ಶನವು
ಜಾತಿ ಮತ ಪಂಥಗಳ ಭೇದವ ಅಳಿಸಿದಿ
ಒಂದೇ ತಾಯಿ ಮಕ್ಕಳೆಂದು ಸಾರಿ ನೀ ಹೇಳಿದಿ.

ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿ ಬೆಳದಿದಿ
ಮುಂದೇ ತನ್ನ ವಿದ್ಯಾರ್ಜನೆಗೆಂದು ಹೋದಿ.
ಹುಬ್ಬಳಿ ಮೂರು ಸಾವಿರ ಮಠದಲ್ಲಿ ಕಲಿತಿದಿ.
ಮಲೆನಾಡಿನಲ್ಲಿಯೇ ವಿದ್ಯಾಸಂಪೂರ್ಣ ಪಡದಿ.

ಮಹಾತ್ಮಗಾಂಧಿ ಆದರ್ಶ ಮಾರ್ಗವೇ ಅರಿತಿದಿ
ಧರ್ಮದ ಏಳಿಗೆಗಾಗಿ ಹಗಲಿರುಳು ದುಡಿಯುತ್ತಿದಿ.
ಅಂಧಕಾರದ ವಿರುದ್ಧ ಭಂಡೆಳಂದಿ.
ಪ್ರಮಾಣಿಕತೆಗಾಗಿ ಪ್ರಾಣ ಅರ್ಪಿಸಂದಿ.

ತನ್ನ ಪ್ರಾಣವನೇ ಮಾನವಕುಲಕ್ಕಾಗಿ ಅರ್ಪಿಸಿದಿ.
ಹಾಳ ಹರಕೂಡವನೇ ಕೈಲಾಸ ಏನಿಸುತ್ತಿದಿ.
ಕಾಯಕದಿಂದಲೇ ಸ್ವರ್ಗವೆಂದು ಸಾರುತ್ತಿದಿ.
ಶಾಂತಿಯಿಂದಲೇ ಜನರಿಗೆ ತಿಳಿಸಿ ನೀ ಹೇಳಿದಿ.

ಸುವಿಚಾರ ಕಲಿಸಿ ಸುಹೃದಯ ಮಾಡಿದಿ
ಝಕಣಚಾರಿಯಂತೆ ಹಗಲಿರುಳು ನಿದ್ರೆಗೆಟ್ಟು ಬಳಲಿದಿ
ವೀರಶೂರ ಧೀರನೆಂಬ ಕೀರ್ತಿಗೆ ಕಾರಣನಾದಿ.
ಗುರುದೇವೋಭವ ಎಂಬ ಕೀರ್ತಿಗೆ ಕಾರಣನಾದಿ.

ಓ ಪುಣ್ಯದ ಪುತ್ಥಳಿಯೇ ಬಾಳ ಬೆಳಕಿನ ಬೆಳ್ಳಿಚುಕ್ಕಿಯೆ
ನಿನ್ನ ಪುಣ್ಯದಿಂದ ಆ ಗುರುವನ್ನು ಕಂಡೆ.
ಮುಕ್ತಿಯ ಮಹಾ ಮಾರ್ಗವನ್ನು ಕಂಡೆ ನಿಜ
ಆ ಗುರುವೇ ಶ್ರೀ ಚನ್ನವೀರ ಶಿವಯೋಗಿ.
*****
೦೭/೦೫/೧೯೯೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈಯಕ್ತಿಕತೆ
Next post ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys